ಗೆಳೆಯರೇ ಕನ್ನಡಿಗರಿಗೆ ಉದ್ಯೋಗ ಅನ್ನುವ ಗುಂಪಿದೆ ಹರ್ಷ ಸರ್, ಆನಂದ್ ಸರ್, ರವೀಂದ್ರ ಸರ್ ಮುಂತಾದವರು ಈ ಗುಂಪನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವುದು ಕಷ್ಟಕರವಾಗಿದೆ. ಮತ್ತು ನಮ್ಮ ಕನ್ನಡದ ಬಳಕೆಯನ್ನು ನಿರ್ಲಕ್ಷಿಸಲಾಗಿದೆ ಇದನ್ನೆಲ್ಲಾ ತಡೆಗಟ್ಟುವ ನಿಟ್ಟಿನಲ್ಲಿ ಈ ಗುಂಪು ಕಾರ್ಯ ನಿರ್ವಹಿಸುತ್ತಿದೆ .
ಮೊನ್ನೆ ದಿನ ಶನಿವಾರ ಈ ಗುಂಪಿನ ಮೀಟಿಂಗ್ ಗೆ ಹೋಗಿದ್ದೆ ಅಲ್ಲಿ ಇದ್ದವರು ಎಲ್ಲಾ ಗೊತ್ತಿರೋ ಮುಖಗಳೇ ಆಗಿದ್ದವು. ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಾವೆಲ್ಲರು ಸೇರಿ ನಾಲ್ಕು ತಂಡಗಳನ್ನಾಗಿ ಮಾಡಿಕೊಂಡೆವು
೧. ಮಾಹಿತಿ ಸಂಗ್ರಹಣ ಮತ್ತು ಸಂಶೋಧನಾ ತಂಡ
೨. ಅಂತರ್ಜಾಲ ತಾಣ ತಂಡ
೩. ಉದ್ಯಮಶೀಲತೆ ತಂಡ
೪. ಕೌಶಲ್ಯ ಅಭಿವೃಧಿ ತಂಡ
ಎಲ್ಲಾ ತಂಡಗಳು ಕಲೆಹಾಕಿದ ಮಾಹಿತಿ, ಕನ್ನಡಿಗರು ಕೆಲಸ ಪಡೆದುಕೊಳ್ಳುವಲ್ಲಿ ಎದರಿಸುವ ಸಮಸ್ಯೆಗಳು ಮತ್ತು ಕುಂದು ಕೊರತೆಗಳನ್ನು ಸರಿ ಪಡಿಸಿ ಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿದೆವು. ಎಲ್ಲಿ ನಮ್ಮ ಕನ್ನಡದ ಬಳಕೆ ಕಾಣುವುದಿಲ್ಲವೋ ಅಲ್ಲಿ ನಮ್ಮ ಕನ್ನಡದ ಬಳಕೆಯನ್ನು ತರಲು ಏನು ಮಾಡಬೇಕು ಎಂಬುದಾಗಿ ಚರ್ಚಿಸಿದೆವು.
ನಾವು ಈಗ ಎಚ್ಚೆತ್ತು ಕೊಳ್ಳದಿದ್ದರೆ ನಮ್ಮ ಕನ್ನಡ ಭಾಷೆ ಇತಿಹಾಸ ಸೇರಿಬಿಡುತ್ತದೆ. ಎಲ್ಲರಲ್ಲೂ ಕನ್ನಡದಲ್ಲೇ ವ್ಯವಹರಿಸಿ ಕನ್ನಡದಿಂದ ಅನ್ನ ಎನ್ನುವಂತೆ ಮಾಡೋಣ ಈ ಕಾರ್ಯಕ್ಕೆ ದಯವಿಟ್ಟು ನೀವೆಲ್ಲರೂ ನಿಮ್ಮ ಕೈ ಜೋಡಿಸಿ ಕನ್ನಡಮ್ಮನ ಸೇವೆಯಲ್ಲಿ ಪಾಲ್ಗೊಳ್ಳಿ
ಮೊನ್ನೆ ದಿನ ಶನಿವಾರ ಈ ಗುಂಪಿನ ಮೀಟಿಂಗ್ ಗೆ ಹೋಗಿದ್ದೆ ಅಲ್ಲಿ ಇದ್ದವರು ಎಲ್ಲಾ ಗೊತ್ತಿರೋ ಮುಖಗಳೇ ಆಗಿದ್ದವು. ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಾವೆಲ್ಲರು ಸೇರಿ ನಾಲ್ಕು ತಂಡಗಳನ್ನಾಗಿ ಮಾಡಿಕೊಂಡೆವು
೧. ಮಾಹಿತಿ ಸಂಗ್ರಹಣ ಮತ್ತು ಸಂಶೋಧನಾ ತಂಡ
೨. ಅಂತರ್ಜಾಲ ತಾಣ ತಂಡ
೩. ಉದ್ಯಮಶೀಲತೆ ತಂಡ
೪. ಕೌಶಲ್ಯ ಅಭಿವೃಧಿ ತಂಡ
ಎಲ್ಲಾ ತಂಡಗಳು ಕಲೆಹಾಕಿದ ಮಾಹಿತಿ, ಕನ್ನಡಿಗರು ಕೆಲಸ ಪಡೆದುಕೊಳ್ಳುವಲ್ಲಿ ಎದರಿಸುವ ಸಮಸ್ಯೆಗಳು ಮತ್ತು ಕುಂದು ಕೊರತೆಗಳನ್ನು ಸರಿ ಪಡಿಸಿ ಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿದೆವು. ಎಲ್ಲಿ ನಮ್ಮ ಕನ್ನಡದ ಬಳಕೆ ಕಾಣುವುದಿಲ್ಲವೋ ಅಲ್ಲಿ ನಮ್ಮ ಕನ್ನಡದ ಬಳಕೆಯನ್ನು ತರಲು ಏನು ಮಾಡಬೇಕು ಎಂಬುದಾಗಿ ಚರ್ಚಿಸಿದೆವು.
ನಾವು ಈಗ ಎಚ್ಚೆತ್ತು ಕೊಳ್ಳದಿದ್ದರೆ ನಮ್ಮ ಕನ್ನಡ ಭಾಷೆ ಇತಿಹಾಸ ಸೇರಿಬಿಡುತ್ತದೆ. ಎಲ್ಲರಲ್ಲೂ ಕನ್ನಡದಲ್ಲೇ ವ್ಯವಹರಿಸಿ ಕನ್ನಡದಿಂದ ಅನ್ನ ಎನ್ನುವಂತೆ ಮಾಡೋಣ ಈ ಕಾರ್ಯಕ್ಕೆ ದಯವಿಟ್ಟು ನೀವೆಲ್ಲರೂ ನಿಮ್ಮ ಕೈ ಜೋಡಿಸಿ ಕನ್ನಡಮ್ಮನ ಸೇವೆಯಲ್ಲಿ ಪಾಲ್ಗೊಳ್ಳಿ
।।ಜೈ ಕರ್ನಾಟಕ ಮಾತೆ।।